ಧಾರವಾಡ: ವಿದ್ಯಕಾಶಿಯೆಲ್ಲಿ ನಿಲ್ಲದ ರಕ್ತದೋಕುಳಿ, ತಾಯಿಯ ಅನೈತಿಕ ಸಂಬಂಧ ನೋಡಿದ ವಿಕಲಚೇತನ ಮಗಳನ್ನು ಅಮಾನುಷವಾಗಿ ಕೊಲೆಗೈದ ಘಟನೆ ನಡೆದಿದೆ.
ಕಮಲಾಪುರದ ಹೂಗಾರ್ ಓಣಿಯಲ್ಲಿ ಈ ಘಟನೆ ನಡೆದಿದೆ. ಜ್ಯೋತಿ ಹಿರೇಮಠ್ ಎಂಬ ತಾಯಿಯೇ ತನ್ನ ಮಗಳಾದ ಸಹನಾ ಹಿರೇಮಠ್ ನಾಲ್ಕು ವರ್ಷದ ಮಗುವನ್ನು ಕೊಲೆಗೈದಿದ್ದಾಳೆ.
ಅನೈತಿಕ ಸಂಬಂಧವನ್ನು ಹೊಂದಿದ ತಾಯಿಯನ್ನು ಓರ್ವ ವ್ಯಕ್ತಿಯ ಜೊತೆಗೆ ಇರುವುದನ್ನು ಆಕೆಯ ಮಗಳು ನೋಡಿರುತ್ತಾಳೆ. ಆದರೇ ಅನೈತಿಕ ಸಂಬಂಧಕ್ಕೆ ಮಗಳು ಅಡ್ಡಿ ಆಗುತ್ತಾಳೆ ಎಂಬ ಆತಂಕದಲ್ಲಿ ಮಗಳೆನ್ನದೇ ತಾಯಿ ಕುತ್ತಿಗೆ ಹಿಚುಕಿ ಅಮಾನವಿಯವಾಗಿ ಕೊಲೆಗೈದಿದ್ದು, ಕೊಲೆಗೆ ಹಿಂದಿರುವ ಸತ್ಯಾಂಶವು ತನಿಖೆಯ ನಂತರ ಮತ್ತಷ್ಟು ಬೆಳಕಿಗೆ ಬರಲಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಧಾರವಾಡದಲ್ಲಿ ಸತತ ಐದು ದಿನದಲ್ಲಿ ಅಪರಾಧ ಕೃತ್ಯಗಳು ನಡೆದಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳುಸುವಂತೆ ಮಾಡಿದೆ.