ಹುಬ್ಬಳ್ಳಿ: ಅಣ್ಣ-ತಮ್ಮರ ಜಗಳವನ್ನು ಬಿಡಿಸಲು ಹೋದ ಅತ್ತಿಗೆಯ ಕುತ್ತಿಗೆಯನ್ನು ಸೀಳಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯ ಎಸ್.ಎಮ್.ಕೃಷ್ಣ ನಗರದಲ್ಲಿ ನಡೆದಿದೆ.

ಸಾಜಿಯಾಭಾನು ಮೃತ ದುರ್ದೈವಿಯಾಗಿದ್ದು, ಈಕೆಯ ಪತಿ ಹಾಗೂ ಮೈದುನ ನಡುವೆ ಕೌಟುಂಬಿಕ ವಿಚಾರಕ್ಕೆ ಜಗಳ ಪ್ರಾರಂಭವಾಗಿದೆ. ಬಳಿಕ ಜಗಳ ವಿಕೋಪಕ್ಕೆ ಹೋಗಿದೆ. ಈ ವೇಳೆ ಜಗಳವನ್ನು ಬಿಡಿಸಲು ಬಂದಿದ್ದ ಸಾಜಿಯಾಭಾನು ಕುತ್ತಿಗೆಯನ್ನು ಮೈದುನ ನಾಸೀರ್ ಸೀಳಿದ್ದಾನೆ.

ಪರಿಣಾಮ ಸಾಜಿಯಾಭಾನು ತೀವ್ರವಾದ ರಕ್ತಸ್ರಾವದಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಮೃತರಾಗಿದ್ದಾಳೆ. ಈ ಘಟನೆ ಕಸಬಾಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಿಮ್ಸ್ ಆಸ್ಪತ್ರೆಗೆ ಪೋಲಿಸ್ ಆಯುಕ್ತ ಎನ್ ಶಶಿಕುಮಾರ್ ಹಾಗೂ ಡಿಸಿಪಿ ನಂದಗಾವಿ ಬೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.