ಹುಬ್ಬಳ್ಳಿ; ಕ್ಯಾಂಟಿನ್ ನಲ್ಲಿ ಬಿಟ್ಟು ಹೋಗಿದ್ದ ಲ್ಯಾಪ್ಟಾಪ್ ನ್ನು ವಾರಸುದಾರರಿಗೆ ವಿದ್ಯಾನಗರ ಠಾಣೆಯ ಪೊಲೀಸರು ಹಸ್ತಾಂತರ ಮಾಡಿದ್ದಾರೆ.

ಇಸ್ಮಾಯಿಲಸಾಬ್ ಅತ್ತಿಗೇರಿ ಎಂಬಾತರು ನಗರದ ಕ್ಯಾಂಟಿನ್ ನಲ್ಲಿ ಬಿಟ್ಟು ಹೋಗಿದ್ದ ಲ್ಯಾಪ್ಟಾಪ್ ನ್ನು ವಿದ್ಯಾನಗರ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ. ಲ್ಯಾಪ್ಟಾಪ್ ಮಾಲೀಕರಾದ ಮಂಜುನಾಥ ಉಮಚಗಿಯರಿಗೆ ಪೊಲೀಸರು ಹಸ್ತಾಂತರ ಮಾಡಿದ್ದಾರೆ.
ಈ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಪೊಲೀಸ್ ಕಮೀಷನರೇಟ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.